ಲೇಖಕ: ಡಾ|| ಕೆ ಎನ್ ಗಣೇಶಯ್ಯ
ಬೆಲೆ: ೧೩೦
ಪ್ರಕಾಶನ: ಅಂಕಿತ ಪ್ರಕಾಶನ
ಮುದ್ರಣ: ಐದನೆಯ ಮುದ್ರಣ ೨೦೧೮
ಎಂದಿನಂತೆ ಗಣೇಶಯ್ಯನವರ ಈ ಕಾದಂಬರಿಯು ಪುರಾತನ ನಾಗರಿಕತೆಯ ಲಿಪಿಯಿಂದ ಶುರುವಾಗಿ, ರೋಚಕತೆಯಿಂದ ಮುಂದೆ ಏನು ಎಂದು ಓದಿಸಿಕೊಂಡು ಒಬ್ಬ ವಿಜ್ಞಾನಿಯ ಅನ್ವೇಷಣೆಯಲ್ಲಿ ಕೊನೆಗೊಳ್ಳುತ್ತದೆ. ಹಾಗೆಯೆ ಇದನ್ನು ಓದಬೇಕಾದರೆ ಎಷ್ಟೋ ಅನೇಕ ಹೊಸ ವಿಚಾರಗಳು ತಿಳಿಯುವುದಂತೂ ನಿಸ್ಸಂದೇಹ. ಅದು ಸಸ್ಯಶಾಸ್ತ್ರ, ಪುರಾತನ ಲಿಪಿ ಓದುವ ಬಗೆ, ಐತಿಹಾಸಿಕ ಶಾಸನಗಳು, ಚರಿತ್ರೆ, ಅಶ್ವಿನಿಗಳ ಮಾಹಿತಿ, ಪುರಾಣಗಳ ಉಲ್ಲೇಖ ಹೀಗೆ ಕಾದಂಬರಿ ಒಂದಕ್ಕೊಂದು ಬೆಸೆದುಕೊಂಡು ಪುಸ್ತಕವನ್ನು ಒಮ್ಮೆ ಓದಲು ಶುರು ಮಾಡಿದರೆ ಅಂತ್ಯದ ವರೆಗೆ ಒಂದೇ ಓಘದಲ್ಲಿ ಓದಿಸಿಕೊಂಡು ಹೋಗುತ್ತದೆ.

No comments:
Post a Comment