ಪುಸ್ತಕ: ಬಳ್ಳಿಕಾಳ ಬೆಳ್ಳಿ
ಲೇಖಕ: ಡಾ|| ಕೆ ಎನ್ ಗಣೇಶಯ್ಯ
ಬೆಲೆ: ೨೨೫
ಪ್ರಕಾಶನ: ಅಂಕಿತ ಪ್ರಕಾಶನ
ಮುದ್ರಣ: ಎರಡನೆಯ ಮುದ್ರಣ ೨೦೧೮
ಈ ಕಾದಂಬರಿಯು ಇತಿಹಾಸದ ಎಳೆಯಿಂದ ಶುರುವಾಗಿ ನಿಧಿ ಹುಡುಕುವತ್ತ ಸಾಗುತ್ತದೆ. ಬಹಳಷ್ಟು ಸತ್ಯ ಘಟನೆಗಳನ್ನಾಧರಿಸಿದ ಇದು ಸತ್ಯ ಘಟನೆಯಂತೆ ಕಣ್ಣಿಗೆ ಕಟ್ಟುವಂತೆ ಬರೆಯಲ್ಪಟ್ಟಿದೆ. ಅರ್ಪಣೆಯಲ್ಲಿ ಉಲ್ಲೇಖಿಸಿದಂತೆ 'ಮರೆತು ಹೋದ ರಾಣಿಯರಿಗೆ ' ತಕ್ಕಂತೆ ಇಲ್ಲಿ ಗತಕಾಲದ 'ಮೆಣಸಿನ ರಾಣಿ' ಯ ಬಗ್ಗೆ ಅಚ್ಚರಿಯ ವಿಷಯಗಳಿವೆ. ಹಾಗೆಯೆ ಭೂತಾರಾಧನೆ, ಹಾಗು ಜಾನಪದ ಕಲೆಗೆ ಇರುವ ಮಹತ್ವವನ್ನು ಎತ್ತಿಹಿಡಿಯುತ್ತದೆ. ಈ ರೋಚಕ ಕಾದಂಬರಿಯನ್ನು ಓದಿದ ನಂತರ ನಮ್ಮ ಪೂರ್ವಿಕರ ಬಗ್ಗೆ ಹೆಮ್ಮೆಯೆನಿಸಿ ಹೃದಯ ತುಂಬಿ ಬರುವಲ್ಲಿ ಸಂಶಯವೇ ಇಲ್ಲ.
ಮುಖಪುಟದ ವಿನ್ಯಾಸ, 'ಬೆಳ್ಳಿ ' ಬರೆಯಲಾದ ವಿಧಾನ ಎಲ್ಲವೂ ಆಕರ್ಷಕವಾಗಿದೆ!

No comments:
Post a Comment