ಪುಸ್ತಕ: ನೆನಪು- ಸಿಹಿ ಕಹಿ
ಲೇಖಕಿ: ಡಾ: ಅನುಪಮಾ ನಿರಂಜನ
ಪ್ರಕಾಶನ: ಡಿ ವಿ ಕೆ ಮೂರ್ತಿ , ಮೈಸೂರು
ಬೆಲೆ: ೧೫೦
ಮುದ್ರಣ: ನಾಲ್ಕನೆಯ ಮುದ್ರಣ, ೨೦೧೯
ಇದು ಲೇಖಕಿಯ ಆತ್ಮಕಥೆ. ತಮ್ಮ ಬಾಲ್ಯದ ದಿನಗಳು, ಕೌಟುಂಬಿಕ ಪರಿಸರ, ಬರವಣಿಗೆ ಶುರುವಾದ ದಿನಗಳು, ವೃತ್ತಿ ಜೀವನ, ಪ್ರೇಮ ವಿವಾಹ, ವೃತ್ತಿಯ ಜೊತೆಗೇ ಬರವಣಿಗೆಗೆ ನೀಡಿದ ಪ್ರಾಮುಖ್ಯತೆ, ಕೊನೆಗೆ ಕ್ಯಾನ್ಸರ್ ನಿಂದ ಬಳಲಿದ್ದು ಹಾಗು ಈ ಎಲ್ಲ ಅಂಶಗಳಲ್ಲಿಯೂ ನುಸುಳುವ ಮತ್ತು ಪ್ರಭಾವ ಬೀರಿದ ಎಲ್ಲ ಮಹನೀಯರನ್ನೂ ಉಲ್ಲೀಖಿಸಿ ಕೃತಜ್ಞತೆ ಸಲ್ಲಿಸಿದ, ಸರಾಗವಾಗಿ ಓದಿಸಿಕೊಂಡು ಹೋಗುವ ಬರವಣಿಗೆ.
ಆತ್ಮಕಥೆಯ ಬರವಣಿಗೆ ಬಗ್ಗೆ ಹೇಳಬೇಕಾದರೆ, ಲೇಖಕಿ ತುಂಬಾ ಪ್ರಾಮಾಣಿಕವಾಗಿ ತಮ್ಮ ಎಲ್ಲ ತಪ್ಪು ಒಪ್ಪಗಳನ್ನು ಚೊಕ್ಕಟವಾಗಿ ನಮೂದಿಸಿದ್ದಾರೆ. ಹಾಗೆಯೆ ಇದರಲ್ಲಿ, ಲೇಖಕಿ ಕಂಡಂತೆ ಅನೇಕ ಗಣ್ಯಾತಿಗಣ್ಯ ಹಾಗು ಮೇರು ವ್ಯಕ್ತಿತ್ವಗಳಾದಂತಹ ಕೊಂಗಾಡಿಯಪ್ಪ, ಕುವೆಂಪು, ನಿರಂಜನ, ವಾಣಿ, ತ್ರಿವೇಣಿ, ಡಾಕ್ಟರ್ ಶಿವರಾಂ, ವೈದೇಹಿ, ಮಿನುಗು ತಾರೆ ಕಲ್ಪನಾ ಅವರಂತಹ ಒಡನಾಟದ ಕಿರುಪರಿಚಯವೂ ಅತಿ ಸ್ಪಷ್ಟವಾಗಿ ಬಿಂಬಿತವಾಗಿದೆ.

No comments:
Post a Comment